ಗುರುವಾರ, ಮಾರ್ಚ್ 14, 2019


#ಚುನಾವಣೆಯ_ಇತಿಹಾಸದ_ಪಾಠಗಳು

ಪಾಠ ೩: ನೋಟಾ (NOTA) ಎಂಬ ಹಲ್ಲು ಕಿತ್ತ ಹಾವು!

೨೦೧೩ ನೆಯ ವರ್ಷದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾ ಆಯೋಗ ನೋಟಾ (NOTA – None Of The Above) ಎಂಬ ಆಯ್ಕೆಯನ್ನು ಮತದಾರರಿಗೆ ನೀಡಿತು. “ನನ್ನ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಯಾವುದೇ ಸ್ಪರ್ಧಿಯೂ ತನ್ನ ವೋಟಿಗೆ ಅರ್ಹನಲ್ಲ” ಎಂದು ಭಾವಿಸುವವರಿಗೆ ಕೂಡ ಒಂದು ಆಯ್ಕೆ ಇರಬೇಕು; ಅಂತಹ ಭಾವನೆ ಉಳ್ಳವರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೇ ಅಂತಹವರು ತಮ್ಮ ಅಸಮ್ಮತಿಯನ್ನಾದರೂ ವ್ಯಕ್ತಪಡಿಸುವ ಆಯ್ಕೆ ನೀಡಬೇಕು ಎನ್ನುವ ಕಾರಣಕ್ಕೆ ಬಂದದ್ದು ನೋಟಾ ವ್ಯವಸ್ಥೆ.

ಚುನಾವಣೆ, ಭ್ರಷ್ಟ ರಾಜಕಾರಣ, ಕೆಟ್ಟ ವ್ಯವಸ್ಥೆಯ ವಿರುದ್ಧ ಪ್ರಜೆಗಳು ದನಿ ಎತ್ತಲು ಇದು ಬಹಳ ಉತ್ತಮ ವಿಧಾನ ಎಂದು ಮೇಲ್ನೋಟಕ್ಕೆಅನಿಸಬಹುದು. ಆದರೆ, ಈ ವ್ಯವಸ್ಥೆಯನ್ನು ೨೦೦೯ರಲ್ಲಿ ಪ್ರತಿಪಾದಿಸಿದಾಗ ಇದನ್ನು ಯಾವ ರಾಜಕೀಯ ಪಕ್ಷವೂ ಬೆಂಬಲಿಸಲಿಲ್ಲ. ಕಡೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ೨೦೧೩ ರಲ್ಲಿ ಇದನ್ನು ಜಾರಿಗೆ ತಂದದ್ದಾಯಿತು. ಅಷ್ಟರಲ್ಲಿ “ಈ ವ್ಯವಸ್ಥೆಯನ್ನು ಹೇಗೆ ನಿರ್ವೀರ್ಯಗೊಳಿಸಬೇಕು?” ಎಂದು ರಾಜಕೀಯ ಪಕ್ಷಗಳು ಲೆಕ್ಕಾಚಾರ ಮಾಡಿದ್ದವು. ಅದರ ಪರಿಣಾಮವೇ “ನೋಟಾ ಎಂಬ ಹಲ್ಲು ಕಿತ್ತ ಹಾವು”!

ಈ ನೋಟಾ ವ್ಯವಸ್ಥೆಯಿಂದ ನಾವು ರಾಜಕಾರಣಿಗಳಿಗೆ ಏನು ಪಾಠ ಕಲಿಸಬಹುದು? ಉತ್ತರ: ಏನೂ ಇಲ್ಲ! ಏಕೆಂದರೆ, ನೋಟಾ ವೋಟುಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ವ್ಯವಸ್ಥೆಯನ್ನು ಭದ್ರಪಡಿಸಲಾಗಿದೆ! ಹಿಂದೆ ಮುದ್ರಿತ ಕಾಗದದ ಮೇಲೆ ಮತ ಒತ್ತುವ ವ್ಯವಸ್ಥೆ ಇದ್ದಾಗ ಕೆಲವರು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಸೀಲು ಒತ್ತುತ್ತಿದ್ದರು. ಇಂತಹ ಮತಗಳನ್ನು “ಕುಲಗೆಟ್ಟ ಮತಗಳು” ಎಂದು ಎಣಿಸಿ ಅದನ್ನು ಗಣನೆಯಿಂದ ಹೊರಗೆ ಇಡುತ್ತಿದ್ದರು. ಈಗ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ಒಂದು ಬಾರಿ ಗುಂಡಿ ಒತ್ತಿದರೆ ವೋಟು ಅಂಗೀಕಾರವಾದಂತೆ. ಎರಡನೇ ಬಾರಿ ಒತ್ತಿದರೆ ಅದು ಗಣನೆಗೂ ಬಾರದು. ಆದ್ದರಿಂದ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕುಲಗೆಟ್ಟ ಮತಗಳು ಬರುವುದಿಲ್ಲ. ಆದರೆ ಈಗ ಈ ನೋಟಾ ವೋಟುಗಳನ್ನು “ಕುಲಗೆಟ್ಟ ಮತಗಳು” ರೀತಿಯಲ್ಲಿ ಎಣಿಸಲಾಗುತ್ತಿದೆ! ಅಂದರೆ ನಾವು ನೋಟಾ ಒತ್ತಿದರೆ ಅದು ಕುಲಗೆಟ್ಟ ಮತಕ್ಕೆ ಸಮಾನ!

ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಬಹುದು: ಈಗ ಲೋಕ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ರೂ. ೨೫,೦೦೦/- ಠೇವಣೆಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಯಾವ ಸ್ಪರ್ಧಿಗೆ ೧೬.೬೭ ಪ್ರತಿಶತ ವೋಟು ಬರುವುದಿಲ್ಲವೋ ಅವರು ಈ ಮೊತ್ತವನ್ನು ಕಳೆದುಕೊಳ್ಳುತ್ತಾರೆ. ಅಂದರೆ, ಒಟ್ಟು ಒಂದು ಲಕ್ಷ ಮಂದಿ ವೋಟು ಹಾಕಿದ್ದರೆ ಠೇವಣೆ ವಾಪಸ್ ಬರಲು ಕನಿಷ್ಠ ೧೬೬೬೭ ವೋಟುಗಳನ್ನಾದರೂ ಪಡೆಯಬೇಕು. ಮುದ್ರಿತ ಕಾಗದದ ಮೇಲೆ ವೋಟು ಹಾಕುವ ಪದ್ಧತಿ ಇದ್ದಾಗ ಒಂದು ಲಕ್ಷ ವೋಟುಗಳಲ್ಲಿ ೨೦೦೦ ವೋಟು ಕುಲಗೆಟ್ಟಿವೆ ಎಂದಾದಲ್ಲಿ “ಚಲಾವಣೆ ಆಗಿರುವ ವೋಟುಗಳು ೯೮೦೦೦ ಮಾತ್ರ” ಎಂದು ಎಣಿಸಿ ೧೬೩೩೪ ವೋಟು ಬಂದರೂ ಠೇವಣೆ ವಾಪಸ್ ಮಾಡುತ್ತಿದ್ದರು. ಈಗ ಅದೇ ಒಂದು ಲಕ್ಷ ವೋಟುಗಳಲ್ಲಿ ೫೦೦೦ ವೋಟುಗಳು “ನೋಟಾ” ಎಂದು ಭಾವಿಸಿ. ಈಗ “ಚಲಾವಣೆ ಆಗಿರುವ ವೋಟುಗಳು ೯೫೦೦೦ ಮಾತ್ರ” ಎಂದು ಲೆಕ್ಕ ಹಾಕುತ್ತಾರೆ. ಅಂತೆಯೇ ೧೫೮೩೪ ವೋಟು ಬಂದರೂ ಅಂತಹವರ ಠೇವಣೆ ವಾಪಸ್ ಆಗುತ್ತದೆ! ಅಂದರೆ, ನಾವು “ನೋಟಾ” ಒತ್ತಿದರೆ ನಮ್ಮ ಕೈಯಾರ ನಮ್ಮ ವೋಟನ್ನು “ಕುಲಗೆಟ್ಟ ಮತ” ಎಂದು ಘೋಷಿಸಿದಂತೆ! ಸ್ಪರ್ಧಿಯ ಅರ್ಹತೆಯನ್ನು ಅಂತಿರಲಿ; ಅವರ ಠೇವಣೆಯನ್ನು ಕೂಡ ಇದರಿಂದ ನಾವು ಕಳೆಯಲಾರೆವು. ಇದು ನಾವು ಸ್ಪರ್ಧಿಯನ್ನು ತಿರಸ್ಕರಿಸಿದಂತೆ ಅಲ್ಲ; ಸ್ಪರ್ಧಿಗಳೇ ನಮ್ಮನ್ನು ತಿರಸ್ಕರಿಸಿದಂತೆ! ಒಂದು ರೀತಿಯಲ್ಲಿ ಆಕಾಶಕ್ಕೆ ಉಗಿದು ನಮ್ಮ ಮುಖದ ಮೇಲೆ ಅದನ್ನು ಚೆಲ್ಲಿಕೊಂಡಂತೆ!

ಒಂದು ವೇಳೆ ನೋಟಾ ಮತಗಳೇ ಅತ್ಯಧಿಕ ಸಂಖ್ಯೆಯಲ್ಲಿ ಚಲಾವಣೆ ಆದರೆ? ರಾಜಕಾರಣಿಗಳಿಗೆ ಅದರ ಚಿಂತೆಯೂ ಇಲ್ಲ! ಅಂತಹ ಸಂದರ್ಭದಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯೇ ವಿಜಯಿ! ಏಕೆಂದರೆ ನೋಟಾ ಮತಗಳನ್ನು “ಕುಲಗೆಟ್ಟ ಮತ” ಎಂದೆ ಪರಿಗಣಿಸಲಾಗುತ್ತದೆ. ಒಂದು ಲಕ್ಷ ಮತಗಳ ಪೈಕಿ ೫೫೦೦೦ ಮತಗಳು ನೋಟಾ ಆದರೂ “ಚಲಾವಣೆ ಆದ ಒಟ್ಟು ಮತಗಳು ೪೫೦೦೦” ಎಂದು ಲೆಕ್ಕ ಹಾಕಿ ಅದರಲ್ಲಿ ವಿಜಯಿಯನ್ನು ಘೋಷಿಸಲಾಗುತ್ತದೆ!

ಸದ್ಯದ ಪರಿಸ್ಥಿತಿಯಲ್ಲಿ ನೋಟಾ ಮತಗಳಿಗೆ ಯಾವ ಕಿಮ್ಮತ್ತೂ ಇಲ್ಲದಂತೆ ನಮ್ಮ ರಾಜಕೀಯ ಪಕ್ಷಗಳು ವ್ಯವಸ್ಥೆ ಮಾಡಿವೆ. ನೋಟಾ ಒತ್ತುವುದರಲ್ಲಿ ಇರುವ ಒಂದೇ ಲಾಭ ಎಂದರೆ ನಮ್ಮ ಮತವನ್ನು ನಾವೇ ಚಲಾವಣೆ ಮಾಡಿರುತ್ತೇವೆ! ನಮ್ಮ ಬದಲಿಗೆ ನಮ್ಮ ಮತವನ್ನು ಮೋಸದಿಂದ ಇನ್ಯಾವನೋ ಚಲಾವಣೆ ಮಾಡದಂತೆ ತಡೆಯುತ್ತೇವೆ. ಆದರೆ, ಅದೇ ಸಮಯಕ್ಕೆ ನಮ್ಮ ಮತವನ್ನು ಕುಲಗೆಡಿಸಿರುತ್ತೇವೆ ಕೂಡ!

ಒಟ್ಟಾರೆ, ನೋಟಾದಿಂದ ಈಗ ಸದ್ಯಕ್ಕೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. “ಯಾವ ಅಭ್ಯರ್ಥಿಯೂ ಸರಿಯಿಲ್ಲ” ಎಂದು ಅನಿಸಿದಾಗ ನೋಟಾ ಒತ್ತುವ ಬದಲಿಗೆ ಕನಿಷ್ಠ “ನಮ್ಮ ದೇಶಕ್ಕೆ ಯಾರು ಪ್ರಧಾನಿ ಆದರೆ ಕ್ಷೇಮ?” ಎಂದು ಪ್ರಶ್ನಿಸಿಕೊಳ್ಳಬೇಕು. ಆ ಪ್ರಶ್ನೆಗೆ ನಮ್ಮ ಬುದ್ಧಿ ಯಾವ ಉತ್ತರ ಹೇಳುತ್ತದೋ ಆ ಪಕ್ಷದ ಅಭ್ಯರ್ಥಿಗೆ ವೋಟು ಹಾಕಬೇಕು. ಇದೊಂದೇ ದಾರಿ; ಇದೊಂದೇ ಸರಿಯಾದ ದಾರಿ ಕೂಡ! ಪರೋಕ್ಷವಾಗಿ ನಮ್ಮ ಪ್ರಧಾನಿಯನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೋ ಅಥವಾ ಪ್ರತ್ಯಕ್ಷವಾಗಿ ಆಕಾಶಕ್ಕೆ ಉಗಿದು ನಮ್ಮ ಮುಖವನ್ನು ನಾವೇ ಹೊಲಸು ಮಾಡಿಕೊಳ್ಳಬೇಕೋ ಎಂಬುದು ನಮಗಿರುವ ಆಯ್ಕೆಗಳು! ನಿರ್ಧಾರಗಳು, ಒಲವುಗಳು ಏನಾದರೂ ಸರಿಯೇ – ದಯವಿಟ್ಟು ತಪ್ಪದೇ ಮತ ಚಲಾಯಿಸಿ.

#Lessons_From_Past_Elections

Lesson 2: Our vote is actually to the political party; not just for the candidate!

An intriguing question for all voters is, "Who should we vote for?" The usual answer is "Irrespective of political party, just pick a good candidate". But in reality, do these good candidates have the freedom to do good?

Perhaps electing independent candidates in elections is no more a choice for voter in our country! The scene of an independent MLA jumping on a table tearing his shirt and shouting obscene abuses in the assembly can never be erased from the voter's memory! The only remaining choices are the candidates from political parties.

Despite being good and competent, candidates of a political party should always follow the commands of their supreme leaders. They have no independent choice of "right or wrong"! Let's say there is some bill in the Legislative Assembly to be passed. That good candidate personally knows that the bill is very good and it will benefit the citizens. However, the political party he represents is against this bill. A dictum arrives from the "High Command" of the party that "the bill must be opposed"; Whip is issues on this regard. There is no seeking of suggestion from the members. Whatever his personal opinion might be, the good candidate is bound to support the party's stand. The individual good nature of such a candidate will not work here.

What options do the voters have when the overall situation is like above? Although the local candidate is extremely capable, he is after all a puppet in the hands of “High Command”. Eventually, the candidate is just as good as the "High Command" of his party! We are actually voting the “High Command” of a political party and the candidate is just a proxy for the same! In reality, each of our votes strengthens the supreme leaders of the political party rather than just letting a candidate win the election. This is true even in municipal elections. As the geographic scope of election increases this fact gets stronger. The truth of this fact is highest in the Lok Sabha elections.

Fielding a "good candidate" is as much a sacred responsibility of a political party as voters choosing a "good candidate". It is the utmost duty of voters to defeat a candidate involved in social misconduct or from criminal background. In such cases the defeat is not only of such malicious candidate, but also a strong lesson for the political party not to take the voters for granted. Actually, if any candidate is so bad, then the choice of voter is very simple!

Let us presume that all the candidates are from reasonably respectable backgrounds, then our choice should not be the individual merit of the candidate alone. Voters should never forget that their vote is actually choosing Rahul / Sonia, Deve Gowda, Mulayam Yadav or Narendra Modi along with the fielded candidate.

If any candidate is too hopeless in this election, then don’t hesitate to refuse him without any ado. But do not give the full score of your decision to the candidate's personal merit alone! Before pressing the button on the voting machine, ask yourself "Whom do you want to see as the Prime Minister at the Center for next 5 years?" The answer to this question should form the basis for your vote. Finally, for common citizens like us, our country is the most important of all. Let your vote be for the candidate of a political party which you believe is best to safeguard the interests of our nation. Whatever might your final decisions be - please vote.


ಸೋಮವಾರ, ಮಾರ್ಚ್ 11, 2019


 #ಚುನಾವಣೆಯ_ಇತಿಹಾಸದ_ಪಾಠಗಳು

ಪಾಠ ೨: ನಮ್ಮ ವೋಟು ತಲುಪುವುದು ರಾಜಕೀಯ ಪಕ್ಷಕ್ಕೆ; ಕೇವಲ ಅಭ್ಯರ್ಥಿಗೆ ಮಾತ್ರ ಅಲ್ಲ!

“ನಾವು ಯಾರಿಗೆ ವೋಟು ಹಾಕಬೇಕು?” ಎಂಬ ಜಿಜ್ಞಾಸೆ ಕಾಡಿದಾಗಲೆಲ್ಲಾ “ಯಾವುದೇ ರಾಜಕೀಯ ಪಕ್ಷದವರಾದರೂ ಸರಿ; ಕೇವಲ ಒಳ್ಳೆಯ ಅಭ್ಯರ್ಥಿಯನ್ನು ಚುನಾಯಿಸಿ” ಎಂಬ ಸಲಹೆಗಳು ನೆನಪಾಗುತ್ತವೆ. ಆದರೆ ಆ ಒಳ್ಳೆಯ ಅಭ್ಯರ್ಥಿಗೆ ಒಳ್ಳೆಯದನ್ನು ಮಾಡುವ ಸ್ವಾತಂತ್ರ್ಯ ಇದೆಯೇ?
ಪಕ್ಷೇತರ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ಕಾಲ ಪ್ರಾಯಶಃ ನಮ್ಮ ದೇಶದಲ್ಲಿ ಕೊನೆಗೊಂಡಿದೆ! ವಿಧಾನಸಭೆಯಲ್ಲಿ ಮೇಜಿನ ಮೇಲೆ ಜಿಗಿಯುತ್ತಾ ಅಂಗಿ ಹರಿದುಕೊಂಡು ಚೀರಾಡಿದ ಪಕ್ಷೇತರ ಶಾಸಕರು ಮತದಾರನ ನೆನಪಿನಿಂದ ಮರೆಯಾಗಲಾರರು! ಈಗ ಉಳಿದಿರುವುದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಚುನಾಯಿಸುವ ಆಯ್ಕೆ ಮಾತ್ರ.

ವೈಯಕ್ತಿಕವಾಗಿ ಅಭ್ಯರ್ಥಿಗಳು ಎಷ್ಟೇ ಒಳ್ಳೆಯವರೂ, ಸಮರ್ಥರೂ ಆಗಿದ್ದರೂ ಕಡೆಗೆ ಅವರು ಆಯಾ ರಾಜಕೀಯ ಪಕ್ಷಗಳ ಮುಖಂಡರ ಆಣತಿ ಪಾಲಿಸಲೇಬೇಕು. ಇಲ್ಲಿ ಅವರಿಗೆ “ಸರಿ-ತಪ್ಪು”ಗಳ ಆಯ್ಕೆ ಇಲ್ಲ! ಈಗ ಶಾಸನಸಭೆಯಲ್ಲಿ ಯಾವುದೋ ಒಂದು ಶಾಸನ ಮಂಡಿಸಿದ್ದಾರೆ ಎನ್ನೋಣ. ಆ ಶಾಸನ ಬಹಳ ಒಳ್ಳೆಯದೆಂದೂ, ಅದರಿಂದ ಪ್ರಜೆಗಳಿಗೆ ಪ್ರಯೋಜನವಾಗುವುದೆಂದೂ ಆ ಒಳ್ಳೆಯ ಅಭ್ಯರ್ಥಿಗೆ ವೈಯಕ್ತಿಕವಾಗಿ ಗೊತ್ತು. ಆದರೆ, ಆತ ಪ್ರತಿನಿಧಿಸುವ ರಾಜಕೀಯ ಪಕ್ಷ ಈ ಶಾಸನಕ್ಕೆ ವಿರೋಧಿ. ಆ ಪಕ್ಷದ “ಹೈ-ಕಮಾಂಡ್”ನಿಂದ “ಆ ಶಾಸನವನ್ನು ವಿರೋಧಿಸಬೇಕು” ಎಂಬ ಆಣತಿ ಬರುತ್ತದೆ; ವಿಪ್ ಜಾರಿಯಾಗುತ್ತದೆ. ಆ ಆಣತಿಗೆ ಎದುರು ಮಾತಿಲ್ಲ; ಸಲಹೆ / ಚರ್ಚೆ ಇಲ್ಲ. ತನ್ನ ವೈಯಕ್ತಿಕ ಅಭಿಪ್ರಾಯ ಏನೇ ಆದರೂ ಪಕ್ಷದ ನಿಲುವನ್ನು ಬೆಂಬಲಿಸುವುದೊಂದೇ ಪರ್ಯಾಯ. ಅಭ್ಯರ್ಥಿಯ ಒಳ್ಳೆಯತನ ಇಲ್ಲಿ ಕೆಲಸಕ್ಕೆ ಬಾರದು.

ಇಂತಹ ಪರಿಸ್ಥಿತಿಯಲ್ಲಿ ಮತದಾರರ ಆಯ್ಕೆಗಳು ಏನಾಗಿರಬೇಕು? ನಮ್ಮ ಲೋಕಲ್ ಅಭ್ಯರ್ಥಿ ಎಷ್ಟೇ ಸಮರ್ಥನಿದ್ದರೂ ಆತ ತನ್ನ ರಾಜಕೀಯ ಪಕ್ಷದ ಅಡಿಯಾಳು ಮಾತ್ರ. ಅಂತಹ ಆಡಳಿತ ಪಕ್ಷದ “ಹೈ-ಕಮಾಂಡ್” ಎಷ್ಟು ಸಮರ್ಥವೋ ನಮ್ಮ ಅಭ್ಯರ್ಥಿ ಕೂಡ ಅಷ್ಟೇ. ಅಂದರೆ, ನಾವು ಒಂದು ಅಭ್ಯರ್ಥಿಯ ರೂಪದಲ್ಲಿ ನಿಜವಾಗಿ ವೋಟು ಹಾಕುತ್ತಿರುವುದು ಆಯಾ ಪಕ್ಷದ ಮುಖಂಡರಿಗೆ! ನಮ್ಮ ಪ್ರತೀ ವೋಟು ಒಂದು ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಹೆಚ್ಚಾಗಿ ಆಯಾ ರಾಜಕೀಯ ಪಕ್ಷದ ನಾಯಕರನ್ನು ಬಲಗೊಳಿಸುತ್ತದೆ. ಪುರಸಭೆ – ನಗರಸಭೆ ಚುನಾವಣೆಗಳಲ್ಲಿ ಕೂಡ ಇದು ಸತ್ಯ. ಚುನಾವಣೆಯ ವ್ಯಾಪ್ತಿ ಹೆಚ್ಚಾದಷ್ಟೂ ಈ ಸಂಗತಿಯ ಬಲ ಅಧಿಕ. ಅಂದರೆ, ಲೋಕಸಭೆಯ ಚುನಾವಣೆಯಲ್ಲಿ ಇದು ಪರಮಸತ್ಯ.

“ಒಳ್ಳೆಯ ಅಭ್ಯರ್ಥಿ”ಯನ್ನು ನಾವು ಚುನಾಯಿಸುವುದಕ್ಕಿಂತ “ಒಳ್ಳೆಯ ಅಭ್ಯರ್ಥಿ”ಯನ್ನು ಕಣಕ್ಕೆ ಇಳಿಸುವ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲಿದೆ. ತೀರಾ ಗೂಂಡಾ ಹಿನ್ನೆಲೆಯ, ಸಮಾಜ ಕಂಟಕ ಕಾರ್ಯಗಳಲ್ಲಿ ಭಾಗಿಯಾದವರನ್ನು ಚುನಾವಣೆಯಲ್ಲಿ ಸೋಲಿಸುವುದು ಕೂಡ ಮತದಾರರ ಕರ್ತವ್ಯ. ಅದು ಆ ವ್ಯಕ್ತಿಯ ಸೋಲು ಮಾತ್ರವಲ್ಲ; ಆತನಿಗೆ ತನ್ನ ಪಕ್ಷದ ಟಿಕೆಟ್ ನೀಡಿದ ರಾಜಕೀಯ ಪಕ್ಷಕ್ಕೆ ಮತದಾರ ನೀಡಿದ ಪ್ರಹಾರ. ಇಂತಹ ಸಂದರ್ಭದಲ್ಲಿ ಮತದಾರರ ಆಯ್ಕೆ ಸುಲಭ!
ಒಂದು ವೇಳೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ತಕ್ಕ ಮಟ್ಟಿಗೆ ಗೌರವಸ್ಥರು ಎನ್ನೋಣ. ಆಗ ನಮ್ಮ ಆಯ್ಕೆ ಕೇವಲ ಅಭ್ಯರ್ಥಿ ಮಾತ್ರವಲ್ಲ. ಈ ಚುನಾವಣೆಯಲ್ಲಿ ನಮ್ಮ ಮತ ಪರೋಕ್ಷವಾಗಿ ರಾಹುಲ / ಸೋನಿಯಾರವರಿಗೋ, ದೇವೇಗೌಡರಿಗೋ, ಮುಲಾಯಂ ಯಾದವರಿಗೋ, ನರೇಂದ್ರ ಮೋದಿ ಅವರಿಗೋ ಎನ್ನುವ ಜಿಜ್ಞಾಸೆ ಕೂಡ ಮತದಾರರಿಗೆ ಇರಬೇಕಾದ್ದೇ.

ಈ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ತೀರಾ ಅಯೋಗ್ಯನಾಗಿದ್ದರೆ ಯಾವ ಮುಲಾಜೂ ಇಲ್ಲದೆ ಅವರನ್ನು ತಿರಸ್ಕರಿಸಿರಿ. ಆದರೆ, ಕೇವಲ ಅಭ್ಯರ್ಥಿಯ ವೈಯಕ್ತಿಕ ಯೋಗ್ಯತೆಗೆ ಮಾತ್ರ ಸಂಪೂರ್ಣ ಅಂಕ ನೀಡಬೇಡಿ! “ಕೇಂದ್ರದಲ್ಲಿ ನೀವು ಯಾರನ್ನು ಪ್ರಧಾನ ಮಂತ್ರಿಯನ್ನಾಗಿ ನೋಡಬೇಕು ಎಂದು ಬಯಸುತ್ತೀರಿ” ಎಂಬ ಪ್ರಶ್ನೆಗೆ ಯಾವ ಉತ್ತರ ಬರುತ್ತದೋ ಅದು ನಿಮ್ಮ ವೋಟಿನ ನಿರ್ಧಾರಕ್ಕೆ ತಳಹದಿ ಆಗಿರಲಿ. ಅಂತಿಮವಾಗಿ ದೇಶಕ್ಕೆ ಯಾವುದು ಹಿತ ಎಂಬುದೇ ನಮ್ಮಂತಹ ಪ್ರಜೆಗಳಿಗೆ ಮುಖ್ಯ. ಆ ಹಿತಕ್ಕೆ ಸಮೀಪವಾಗಿರುವ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತ ಇರಲಿ. ಏನಾದರೂ ಸರಿಯೇ – ದಯವಿಟ್ಟು ಮತ ಚಲಾಯಿಸಿ.